ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?
ಮನಸೇ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತಾ ಮಹಾ ಚಂಚಲ
ಆಸೇ ತಿಮಿಂಗಿಲಾ
ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸ್ಸೂ ಇದೆ ಗಾಳಿಯೊಳಗೆ
ಸುಖದ ಬಹುಮಾನ ಉಚಿತ ಕೊಡುವಂತ
ಪಂಚಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ
ಮನಸೇ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತಾ ಮಹಾ ಚಂಚಲ
ಮನ್ಮಥಾ ಸಮಯ ಸಾಧಕ
ಇಂದೂ ಗೆಲ್ಲೂ ಇಂದ್ರೀಯಗಳ
ಕೊಲ್ಲೂ ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ
ಕುಣಿವ ತನು ಒಳಗೆ
ಕಹಿಯ ವಿಷಗಳಿಗೆ ತರುವುದೆಂತೋ
ಕಣ್ಣು ಮುಚ್ಚಿದರು ಕಾಣೊ ಸ್ವರ್ಗವನು
ಸವಿಯೊ ಹೆಣ್ಣೆದೆಯ ಜರಿವುದೆಂತೋ
ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?
ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು
ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ
ಮನಸೇ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತಾ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ
ದ್ರೌಪದಿ ... ದ್ರೌಪದಿ ... ಎಂದಿನದೇ ಕದನ
ಷಟ್ಪದಿ ... ಚೌಪದಿ ...ಯಾವುದರಲೀ ಈ ಕವನ ?
Friday, March 9, 2007
Subscribe to:
Post Comments (Atom)
No comments:
Post a Comment